ಭಾಗ್ಯನಗರ

ಈ ಚೌಕಾಂಬದಲಿ ನಿಂತು ಕೇಳುವೆನು ನಾನು
ಭಾಗ್ಯ ನಗರವೇ ನಿನ್ನೆ ಭಾಗ್ಯದ ಬಾಗಿಲೆಲ್ಲಿ?
ಇಷ್ಟೆತ್ತರದಿಂದ ಕಾಣಿಸುವುದೇನು-ಜನರು
ಇರುವೆಗಳಂತೆ, ಟ್ರಕ್ಕುಗಳು, ಬಸ್ಸುಗಳು
ಎತ್ತಿನಗಾಡಿಗಳು, ತಲೆಹೊರೆಯ ಮೂಟೆಗಳು
ಯಾರೋ ಆಡುತ್ತಿರುವ ಆಟಿಕೆಗಳಂತೆ
ಮನುಷ್ಯರ ಮಾತುಗಳು ಗೊಂದಲದಂತೆ

ಗಾರೆಯಲಿ ಬರೆದ ಈ ಹೆಸರುಗಳು
ಯಾರವೆಂದು ಹೇಳುವುದು ಹೇಗೆ ?
ಚರಿತ್ರೆಯಲ್ಲಿ ಬರೆದಂತೆ ಬರೆದಿದ್ದಾರೆ ಇಲ್ಲಿ
ಹೆಣ್ಣುಗಂಡುಗಳು ಪ್ರವಾಸಿಗಳು ಪ್ರಣಯಿಗಳು
ಈ ಸುತ್ತು ಮೆಟ್ಟಲುಗಳನೊಂದೊಂದೆ
ಏರಿ ಬಂದವರು ಕಿಂಡಿಗಳ ಬಳಿ ನಿಂತು
ಮೂಸಿ-ಗೊಲ್ಕೊಂಡ-ಫಲಕ್‌ನುಮಾದ
ಮೇಲಿಂದ ಬೀಸಿ ಬರುವ ಗಾಳಿಗೆ ತೆರೆದು
ಮಾಯಾ ಪಕ್ಷಿಗಳಂತೆ ಮಾಯವಾದವರು
ಏನ ಬಿಟ್ಟರು ಏನ ಕೊಂಡೊಯ್ದರು

ಮಾರ್ಗಗಳು ಹೊರಟು ಊರುಗಳ ಸೇರಿದುವು
ಮಿನಾರಗಳ ನೆರಳು ಬಿದ್ದು ಬೆಳೆದುವು
ಅವು ಕೋಟೆಕೊತ್ತಲಗಳ ರೂಪು ತಳೆದುವು
ಅದೊ ಬುರುಜು! ಅದೊ ಸೇನೆ! ಅದೊ
ತೋಫಖಾನೆ! ಅದೋ ಅಂತಃಪುರದಿ೦ದ
ಹೊರಟ ಮೇನೆ! ಜಾಗಟೆಯ ಧ್ವನಿಯೊ
ನಮಾಜಿನ ಕರೆಯೊ ಕಾಳಗದ ಕಹಳೆಯೊ
ಕಂಡರೂ ಕಾಣಿಸದು ಕೇಳಿದರೂ ಕೇಳಿಸದು
ಸಂಜೆಯ ಮಬ್ಬಿನಲಿ ನನ್ನ ಜತೆ ಯಾರಿಲ್ಲ
ನನ್ನ ಹೊರತು ಯಾರೂ ಇರದಲ್ಲಿ? ಆಹ್!

ಯಾರ ಭಾಗದ ಭಾಗ್ಯ! ಭಾಗ್ಯಮತಿಯೇ
ಇನ್ನೂ ಇಲ್ಲೇಕೆ ಕುಳಿತಿರುವೆ ನೀನು?
ನಾಟ್ಯ ಮುಗಿಯಿತು, ದರಬಾರು ಮುಗಿಯಿತು
ಸುಲ್ತಾನನೂ ಹೊರಟು ಹೋದನು ಅರಮನೆಗೆ
ನಗರದ ದೀಪಗಳು ಒಂದೊಂದೆ ಆರಿಹೋಗಿವೆ
ಕತ್ತಲು ಬಂದು ಮಿನಾರಗಳನ್ನು ಮುತ್ತಿವೆ
ತಿಂಗಳಿನ್ನೂ ಮೂಡಿರದ ಹೊತ್ತು ಹೊಳೆಯುವುದು
ಮಾತ್ರ ನನ್ನ ಮೂಗಿನ ನತ್ತು ಬೆಳ್ಳಿ ನಕ್ಷತ್ರ –
ದಂತೆ ನರ್ತಿಸಿ ಆಯಾಸಗೊಂಡವಳೆ ನನ್ನ
ಕಲ್ಪನೆಯಲ್ಲಿ ಬಂದು ಇಡಿಯಾಗಿ ನಿಲ್ಲು
ನಿನ್ನ ಪ್ರೀತಿಯ ಬೆಳಕ ಚೆಲ್ಲು
ನಿನ್ನ ಹೆಸರನೆ ಹೊತ್ತ ನಗರದ ಮೇಲೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೊದಮೊದಲು
Next post ಪ್ರಪಾತ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys